ಬೆಳ್ಳಿತೊರೆ (Bellitore)
Language: Kannada Publication details: ಬೆಂಗಳೂರು : ಅಂಕಿತ ಪುಸ್ತಕ, 2019Description: 192ISBN:- 9789387192591
- 791.43 RAG
Item type | Current library | Collection | Call number | Status | Date due | Barcode | Item holds | |
---|---|---|---|---|---|---|---|---|
![]() |
Alliance School of Liberal Arts | Alliance Literary Fest (ALF) – Featured Writers & Authors Collection | 791.43 RAG (Browse shelf(Opens below)) | Available | LA04568 | |||
![]() |
Alliance School of Liberal Arts | Alliance Literary Fest (ALF) – Featured Writers & Authors Collection | 791.43 RAG (Browse shelf(Opens below)) | Available | LA04567 |
Browsing Alliance School of Liberal Arts shelves, Collection: Alliance Literary Fest (ALF) – Featured Writers & Authors Collection Close shelf browser (Hides shelf browser)
791.4 AKH Talking Life: In Conversation with Nasreen Munni Kabir | 791.4 AKH Talking Life: In Conversation with Nasreen Munni Kabir | 791.43 RAG ಬೆಳ್ಳಿತೊರೆ (Bellitore) | 791.43 RAG ಬೆಳ್ಳಿತೊರೆ (Bellitore) | 791.4301 VIG Critical Theory and Film: Rethinking Ideology through Film Noir | 791.4301 VIG Critical Theory and Film: Rethinking Ideology through Film Noir | 791.430954 RAN Conversations with Mani Ratnam |
ರಘುನಾಥ ಚ.ಹ ಅವರ ಸಿನಿಮಾ ಪ್ರಬಂಧಗಳ ಸಂಕಲನ ಬೆಳ್ಳಿತೊರೆ. ಬೆಳ್ಳಿತೊರೆಯ ಕುರಿತ ವಿಷಯಗಳನ್ನು ಆಸ್ಥೆಯಿಂದ ಬರೆದಿರುವ ರಘುನಾಥರ ಈ ಪುಸ್ತಕದ ಕುರಿತು ಬರಗೂರು ರಾಮಚಂದ್ರಪ್ಪ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಬರಗೂರರ ಮಾತುಗಳಲ್ಲಿಯೇ ಈ ಕೃತಿಯ ಬಗ್ಗೆ ತಿಳಿಯುವುದಾದರೆ ’ಈ ಸಂಕಲನದ ಮೊದಲ ಲೇಖನದಲ್ಲಿ ಪ್ರಸ್ತಾಪಿತವಾಗುವ ‘ಊಟ’ದ ಸಂಗತಿಯು ಯಾವ ಸಿನಿಮಾ ಮಂದಿಯೂ ಲೆಕ್ಕಿಸದ ಸಣ್ಣ ಸಂಗತಿ. ಆದರೆ ರಘುನಾಥ್ ಬರಹವು ನಮ್ಮ ಸಿನಿಮಾಗಳಲ್ಲಿರುವ ಊಟದ ಪ್ರಸಂಗಗಳ ಸಣ್ಣ ಸಂಗತಿಯನ್ನು ‘ಎಂದೂ ಮುಗಿಯದ ಊಟ’ವೆಂಬ ಶೀರ್ಷಿಕೆಯಲ್ಲೇ ದೊಡ್ಡದಾಗಿ ಬಿಂಬಿಸುತ್ತದೆ. ಅದು ಶೀರ್ಷಿಕೆಯಲ್ಲಷ್ಟೇ ದೊಡ್ಡದಾಗದೆ ಲೇಖನದ ಪ್ರತಿ ಪ್ರಸಂಗಗಳ ಮೂಲಕ ದೊಡ್ಡದಾಗಿ ಬೆಳೆಯುತ್ತದೆ. ‘ಮಾಯಾಬಜಾರ್’ ಚಿತ್ರದ ಘಟೋತ್ಕಚನ ‘ವಿವಾಹ ಭೋಜನವಿದು, ವಿಚಿತ್ರ ಭಕ್ಷ್ಯಗಳಿವು’ ಎಂಬ ಹಾಡಿನಿಂದ ಆರಂಭಿಸಿ, ‘ಸತ್ಯ ಹರಿಶ್ಚಂದ್ರ’ ಚಿತ್ರದ ‘ಶ್ರಾದ್ಧದೂಟ ಸುಮ್ಮನೆ, ನೆನಸಿಕೊಂಡ್ರೆ ಜುಮ್ಮನೆ’ ಹಾಡನ್ನು ಹಾದು ‘ಬೂತಯ್ಯನ ಮಗ ಅಯ್ಯು’ ಚಿತ್ರದ ಹೋಟೆಲ್ ಪ್ರಸಂಗವನ್ನು ದಾಖಲಿಸುತ್ತದೆ. ವಿಶೇಷವಾಗಿ ‘ಬೇಡರ ಕಣ್ಣಪ್ಪ’ ಚಿತ್ರದ ‘ಶಿವಪ್ಪ ಕಾಯೊ ತಂದೆ ಮೂರು ಲೋಕ ಸ್ವಾಮಿ ದೇವಾ | ಹಸಿವೆಯನ್ನು ತಾಳಲಾರೆ ಕಾಪಾಡೆಯಾ’ ಎಂಬ ಹಾಡಿನ ಸಂದರ್ಭವನ್ನು ರಘುನಾಥ್ ವಿಶ್ಲೇಷಿಸುವ ರೀತಿಯು ಒಳನೋಟದ ಅನನ್ಯ ಮಾದರಿಯಾಗಿದೆ. ಇದು ‘ಹಸಿದ ದೀನರ ಪಾಲಿಗೆ ಪ್ರಾರ್ಥನಾಗೀತೆ’ ಎಂಬ ಅವರ ವ್ಯಾಖ್ಯಾನ ಮತ್ತು ಅದನ್ನು ಸಮಕಾಲೀನ ಸಂದರ್ಭಕ್ಕೆ ತಂದು ತೋರುವ ಕಾಣ್ಕೆ, ಕಳಕಳಿಯ ಕಣ್ಣೋಟವಾಗಿದೆ. ಈ ಲೇಖನವು ಇಡೀ ಕೃತಿಯ ವಸ್ತು ನಿರ್ವಹಣಾ ವಿಧಾನದ ದಿಕ್ಸೂಚಿಯಂತಿದೆ.
There are no comments on this title.